ಹೆಚ್.ಡಿ.ಡಿ, ಖರ್ಗೆ, ಮೊಯ್ಲಿ ಹಾಗೂ ಮುನಿಯಪ್ಪ ಅವರಿಗೆ ಸೋಲು ಖಚಿತ : ಬಿ.ಎಸ್. ಯಡಿಯೂರಪ್ಪ…

204
firstsuddi

ಬೆಂಗಳೂರು : ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ತುಮಕೂರಿನಲ್ಲಿ ಹೆಚ್. ಡಿ. ದೇವೇಗೌಡ್ರು, ಕೋಲಾರದಲ್ಲಿ ಕೆ.ಹೆಚ್. ಮುನಿಯಪ್ಪ ಹಾಗೂ ಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಅವರ ಸೋಲು ಖಚಿತ. ನಾನು ನಿಮ್ಮನ್ನು ಮೆಚ್ಚಿಸಲು ಈ ಮಾತನ್ನು ಹೇಳುತ್ತಿಲ್ಲ. ಸರಿಯಾಗಿ ತಿಳಿದುಕೊಂಡು ಹೇಳುತ್ತಿದ್ದೇನೆ. ಕಾರ್ಯಕರ್ತರು ಉಪಚುನಾವಣೆ ಆಗುವವರೆಗೂ ಫಾರಿನ್ ಟ್ರಿಪ್, ಹನಿಮೂನ್‍ಗೆ ಹೋಗುವಂತಿಲ್ಲ. ಮೇ23 ನಂತರ ಎಲ್ಲಿ ಬೇಕಾದರೂ ಹೋಗಿ ನಾನೇನು ಕೇಳುವುದಿಲ್ಲ ಎಂದು ಹೇಳಿದ್ದು, ಚಿಂಚೋಳಿ ಹಾಗೂ ಕುಂದಗೋಳ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಕಳುಹಿಸಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಎರಡೂ ಕ್ಷೇತ್ರಗಳಿಗೂ ಹೋಗಿ ಜಿಲ್ಲಾ ಹಾಗೂ ವಾರ್ಡ್ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.