ಮಂಗಳೂರು : ಗಾಂಜಾ ಸೇವನೆ ಆರೋಪದಡಿಯಲ್ಲಿ ಬಲ್ಲಾಳ್ ಬ್ಯಾಗ್ ಅಪಾರ್ಟ್ ಮೆಂಟಿನ ಮೇಲೆ ದಾಳಿ ನಡೆಸಿದ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಸಕಲೇಶಪುರದ ನಿವಾಸಿ ಮೊಹಮ್ಮದ್ ನಾಸಿರ್ (18) ಮತ್ತು ಕೇರಳದ ಹೇಮಂತ್ ತಮಾಸ್ (21) ಮತ್ತು ಕುರುವಿಲ್ಲಾ ಜಾರ್ಜ್ (21) ಎಂದು ಗುರುತಿಸಲಾಗಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










