ಮೂಡಿಗೆರೆ : ಕಳೆದ ಒಂದು ತಿಂಗಳಿಂದ ಸುರಿದ ರಣಭೀಕರ ಮಳೆ, ಮಗದೊಡೆ ಆನೆಯ ಹಾವಳಿ ಮಲೆನಾಡಿಗರಿಗೆ ಗಾಯದ ಮೇಲೆ ಉಪ್ಪು ಬಿದ್ದ ಅನುಭವವಾಗಿದೆ. ತಾಲ್ಲೂಕಿನ ಮೂಲರಹಳ್ಳಿ ಗ್ರಾಮದ ನಾಗೇಶ್ ಹಾಗೂ ಅಶೋಕ್ ಎಂಬುವವರಿಗೆ ಸೇರಿದ ಕಾಫಿ ತೋಟ ಹಾಗೂ ಗದ್ದೆಗಳನ್ನು ಸಂಪೂರ್ಣ ನಾಶ ಮಾಡಿದ್ದು, ಇಡೀ ರಾತ್ರಿ ಮೂರು ಆನೆಗಳು ಬೀಡು ಬಿಟ್ಟಿದ್ದು, ಪಟಾಕಿ ಹಚ್ಚಿ ಓಡಿಸಲು ಮುಂದಾದ ಸ್ಥಳೀಯರ ಮೇಲೂ ಆನೆ ದಾಳಿಗೆ ಮುಂದಾಗಿದ್ದು, ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಸ್ಥಳೀಯರು ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲ್ಲ. ನಮಗೆ ಇಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದ ಕಾರಣ ತಿಳಿಸುವುದಕ್ಕೂ ಕಷ್ಟವಾಗಿದೆ. 2-3 ಕಿ. ಮೀ ದೂರ ತೆರಳಿ ಅರಣ್ಯ ಇಲಾಖೆಗೆ ಕರೆ ಮಾಡಿದರೂ ಯಾವಾಗಲೋ ಬಂದು ಪಟಾಕಿ ಸಿಡಿಸಿ ಹೋಗುತ್ತಾರೆ ಎಂದು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.










