ಮೂಡಿಗೆರೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮನೆ ಕುಸಿತಗೊಂಡ ಕುಟುಂಬಕ್ಕೆ ನೆರವು…

276
firstsuddi

ಕೊಟ್ಟಿಗೆಹಾರ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆಯ ವತಿಯಿಂದ ಜಾವಳಿ ವಲಯದ ಕೂವೆ ಹುಯಿಲು ಮನೆಯ ಜ್ಯೋತಿ ಸಂಘದ ಸದಸ್ಯರಾದ ವನಜಾಕ್ಷಿ ಅವರಿಗೆ ಅತಿವೃಷ್ಟಿಯಿಂದ ಮನೆ ಕುಸಿದ ಹಿನ್ನಲೆಯಲ್ಲಿ ಧನಸಹಾಯದ ಚೆಕ್ ವಿತರಿಸಲಾಯಿತು.
ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲ್ಯಾನ್, ಜಿಲ್ಲಾ ನಿರ್ದೇಶಕರಾದ ಪ್ರಕಾಶ್‍ರಾವ್, ತಾಲ್ಲೂಕು ಯೋಜನಾಧಿಕಾರಿ ವಿಠಲ್ ಪೂಜಾರಿ, 5 ಸಾವಿರದ ಅನುದಾನದ ಚೆಕ್ ವಿತರಿಸಿದರು. ವಲಯ ಮೇಲ್ವಿಚಾರಕರಾದ ಚಿತ್ತರಂಜನ್, ಒಕ್ಕೂಟ ಅಧ್ಯಕ್ಷರಾದ ದಿನಕರ್, ಪ್ರಶಾಂತ್, ಮಹೇಶ್ ಇದ್ದರು.