ಗಾಂಜಾ ಮಾರಾಟ ಏಳು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ…

277
firstsuddi
ಮಂಗಳೂರು: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಎಂಬಲ್ಲಿ ಸಾರ್ವಜನಿಕರಿಗೆ ಮಾರಾಟದ ಬಗ್ಗೆ ತಮ್ಮ ವಶದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾ ಹೊಂದಿರುವ ಆರೋಪಿಗಳಾದ ಮೊಹಮ್ಮದ್ ಸಿನಾನ್.ಪಿ., ಹಫೀಜ್  ಅಮೀನ್ (21), ಜುಹೈರ್.ಕೆ.ಪಿ. (21), ಆದರ್ಶ್‍(20), ಮೊಹಮ್ಮದ್ ನಿಹಾಲ್.ಆರ್.ಕೆ. (20), ಬಿಶ್ರುಲ್ ಹಫೀ (20), ಜಾಕೀರ್ ಆಲಿ.ಪಿ. (22)
ಎಂಬವರುಗಳನ್ನು ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಮತ್ತು ಪೊಲೀಸ್ ಉಪ-ನಿರೀಕ್ಷಕರಾದ ಗುರಪ್ಪ ಕಾಂತಿ, ವಿನಾಯಕ ತೋರಗಲ್, ಮತ್ತು ಸಿಬ್ಬಂದಿಯವರು ಹಾಗೂ ರೌಡಿ ನಿಗ್ರದ ದಳದ ಸಿಬ್ಬಂದಿಯವರು ಪತ್ತೆ ಮಾಡಿ ಆರೋಪಿಗಳ ವಶದಲ್ಲಿ ದೊರೆತ
1)ಒಟ್ಟು 1 ಕಿಲೋ 103 ಗ್ರಾಂ ತೂಕದ ನಿಷೇದಿತ ಮಾದಕ ವಸ್ತು ಗಾಂಜಾ ಇದರ ಅಂದಾಜು ಮೌಲ್ಯ 41,000-00
2)ಬುಲೆಟ್ ಬೈಕ್ ಅಂದಾಜು ಮೌಲ್ಯ ರೂ. 1,00,000-00,
3) 6 ಮೊಬೈಲ್ ಪೋನ್ಗಳು ಅಂದಾಜು ಮೌಲ್ಯ ರೂ.23,000-00
4)ನಗದು ಹಣ ರೂ.460-00
ಈ ಮೇಲಿನ ಆರೋಪಿಗಳ ವಿರುದ್ಧ ಉಳ್ಳಾಲ ಪೊಲೀಸ್ ಠಾಣಾ ಮೊ.ನಂ. 99/2019 ಕಲಂ 8(ಸಿ), 20(b)(ii)B ಎನ್‍.ಡಿ.ಪಿ.ಎಸ್.ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ಆರೋಪಿಗಳೆಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಇವರುಗಳು ಮೆಡಿಕಲ್ ಕಾಲೇಜ್ ಮತ್ತಿತರ ಕಾಲೇಜ್ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವವರಾಗಿರುತ್ತಾರೆ.
ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಡಾ: ಪಿ.ಎಸ್.ಹರ್ಷ, ಐ.ಪಿ.ಎಸ್. ರವರ ನಿರ್ದೇಶನದಂತೆ ಮಾನ್ಯರಾದ ಶ್ರೀ ಅರುಣಾಂಗ್ಶು ಗಿರಿ (ಐಪಿಎಸ್) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಶ್ರೀ ಲಕ್ಷ್ಮೀಗಣೇಶ (ಡಿ.ಸಿ.ಪಿ ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ಶ್ರೀ ಟಿ.ಕೋದಂಡರಾಮ ರವರ ನೇತೃತ್ವದಲ್ಲಿ ಆರೋಪಿಗಳನ್ನು ಪತ್ತೆ ಮಾಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪೊಲೀಸ್ ನಿರೀಕ್ಷಕರಾದ ಗೋಪಿಕೃಷ್ಣ.ಕೆ.ಆರ್. ಪೊಲೀಸ್ ಉಪ-ನಿರೀಕ್ಷಕರಾದ ಗುರಪ್ಪ ಕಾಂತಿ, ವಿನಾಯಕ ತೋರಗಲ್, ಮತ್ತು ಸಿಬ್ಬಂದಿಗಳಾದ ಮನೋಹರ ಸಿಹೆಚ್‍್ಸಿ 1112, ರಂಜಿತ್ ಸಿಪಿಸಿ 386, ಪ್ರಶಾಂತ್ ಸಿಪಿಸಿ 561, ಲಿಂಗರಾಜ್, ಸಿಪಿಸಿ 553, ಅಕ್ಬರ್ ಸಿಪಿಸಿ 2412 ಹಾಗೂ ರೌಡಿ ನಿಗ್ರದ ದಳದ ಸಿಬ್ಬಂದಿಯವರು ಸಹಕರಿಸಿರುತ್ತಾರೆ