ಮೂಡಿಗೆರೆ : ಹಂತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಉತ್ತಮ್ ಕುಮಾರ್, ಉಪಾಧ್ಯಕ್ಷರಾಗಿ ಜಾಣಿಗೆ ಮೋಹನ್ ಅವಿರೋಧ ಆಯ್ಕೆ…

1140
firstsuddi

ಮೂಡಿಗೆರೆ : ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಹಂತೂರು ಆಡಳಿತ ಮಂಡಳಿ ಅಧ್ಯಕ್ಷರಾಗಿ ಹೆಚ್.ಜಿ ಉತ್ತಮ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಜಾಣಿಗೆ ಮೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉತ್ತಮ್ ಅವರು ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹಳಸೆ ಶಿವಣ್ಣ, ಕಣಚೂರು ವಿನೋದ್, ದೇವರುಂದ ರಮೇಶ್, ನಿರ್ದೇಶಕರುಗಳಾದ ಪ್ರಸನ್ನ ಕುಮಾರ್, ನಯನ ಕಣಚೂರು, ಕೆ.ಎ. ಸುರೇಶ್, ಯು.ಆರ್ ರಾಮಚಂದ್ರಾಚಾರ್, ಗಿರೀಶ್, ಪ್ರಕೃತಿ ರಮೇಶ್, ರವಿ ಆಚಾರ್, ಪಿ.ಎಂ ಬಾಬು, ನಾಗೇಶ್ ಜೇನುಬೈಲು, ಲಕ್ಷ್ಮಿ ಹಾಗೂ ಆಡಳಿತಾಧಿಕಾರಿ ಸುಮಿತ್ರೇಗೌಡ, ಸಿಬ್ಬಂಧಿಗಳಾದ ಧರಣೇಂದ್ರ, ಸಿತಿನ್, ಪ್ರಸನ್ನ, ಸುರೇಶ್, ಮಂಜುನಾಥ್ ಶೆಟ್ಟಿ ಹಾಗೂ ಚುನಾವಣಾಧಿಕಾರಿಯಾದ ಮಹೇಶ್ ಇದ್ದರು.