ಡಿ.ಕೆ ಶಿವಕುಮಾರ್ ಇಲ್ಲದಿದ್ದರೆ ಜೆ.ಡಿ.ಎಸ್-ಕಾಂಗ್ರೇಸ್ ಸಮ್ಮಿಶ್ರ ಸರ್ಕಾರ ಕನಸಿನ ಮಾತು ? ಸಿ.ಎಂ ಲಿಂಗಪ್ಪ

309
firstsuddi

ಸಮ್ಮಿಶ್ರ ಸರ್ಕಾರ ರಚನೆಗೆ ಡಿ.ಕೆ ಶಿವಕುಮಾರ್ ಇಲ್ಲದಿದ್ದರೆ ಕಾಂಗ್ರೇಸ್‍ನ 25ಕ್ಕೂ ಹೆಚ್ಚು ಶಾಸಕರು ಬಿ.ಜೆ.ಪಿ ಪಾಲಾಗುತ್ತಿದ್ದರು, ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ ಲಿಂಗಪ್ಪ ಸುದ್ದಿಗೊಷ್ಠಿಯಲ್ಲಿ ಹೇಳಿದ್ದಾರೆ.ಚುನಾವಣಾ ಫಲಿತಾಂಶ ಬಂದ ಬಳಿಕ ಸರ್ಕಾರ ರಚನೆಯಾಗಲು ಡಿ.ಕೆ ಶಿವಕುಮಾರ್ ಶಾಸಕರನ್ನು ಉಳಿಸಿಕೊಳ್ಳಲು ಪ್ರಮುಖ ಪಾತ್ರ ವಹಿಸಿದ್ದು, ಆದರೆ ಈಗ ಕಾಂಗ್ರೇಸ್‍ನಲ್ಲಿಯೇ ಅವರ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು. ಡಿ.ಕೆ.ಶಿಯವರನ್ನು ತುಳಿಯಲು ಪ್ರಯತ್ನಪಡುತ್ತಿರುವುದು ಬೆಳಕಿಗೆ ಬಂದಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.