ಬೆಂಗಳೂರು: ಗಣಿಗಾರಿಕೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಕ್ರಮದ ಭಾಗವಾಗಿ ರಾಜ್ಯ ಸರ್ಕಾರವು ಕೈಬಿಟ್ಟಿದ್ದ ಗಣಿಗಾರಿಕೆ ಪ್ರದೇಶಗಳನ್ನು ಪ್ರವಾಸಿ ಆಕರ್ಷಣೀಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಮುಂದಾಗಿವೆ. ಗಣಿಗಾರಿಕೆ ಪ್ರವಾಸೋದ್ಯಮವನ್ನು ಜನಪ್ರಿಯಗೊಳಿಸುವ ದಕ್ಷಿಣ ಆಫ್ರಿಕಾ ವಿಧಾನದಿಂದ ಸ್ಫೂರ್ತಿ ಪಡೆದ ಪ್ರವಾಸೋದ್ಯಮ ಇಲಾಖೆಯು ಹೊಸದಾಗಿ ಅನುಮೋದಿಸಲಾದ 2024-29 ಪ್ರವಾಸೋದ್ಯಮ ನೀತಿಯಲ್ಲಿ 25 ವಿಷಯಗಳಲ್ಲಿ ಸೇರಿಸಿದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಲಾಯಿತು. ಗಣಿಗಾರಿಕೆ ಪ್ರವಾಸೋದ್ಯಮ ಸೇರಿದಂತೆ ಕೇಂದ್ರ ಸರ್ಕಾರದ ಉಪಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಪ್ರವಾಸೋದ್ಯಮ ನೀತಿ ಮತ್ತು ಅದರ ವಿವಿಧ ಆಯಾಮಗಳನ್ನು ಯೋಜಿಸಲಾಗಿದೆ. ಬಳ್ಳಾರಿ ಮತ್ತು ಇತರ ಪ್ರದೇಶಗಳಲ್ಲಿ ಕೈಬಿಟ್ಟ ಸ್ಥಳಗಳನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು. ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಖನಿಜ ಸಂಪತ್ತುಗಳಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕರ್ನಾಟಕ ಮೈನಿಂಗ್ ಎನ್ವಿರಾನ್ಮೆಂಟ್ ರಿಸ್ಟೋರೇಶನ್ ಕಾರ್ಪೊರೇಷನ್ ಮತ್ತು ಇತರ ಏಜೆನ್ಸಿಗಳ ಸಹಯೋಗದೊಂದಿಗೆ, ಪ್ರವಾಸೋದ್ಯಮ ಸಂಭಾವ್ಯತೆಯೊಂದಿಗೆ ಭೌಗೋಳಿಕ ಪರಂಪರೆಯ ತಾಣಗಳು ಮತ್ತು ಅವಶೇಷಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಪ್ರಸ್ತಾವಿತ ಉಪಕ್ರಮಗಳಲ್ಲಿ ವಸ್ತು ಸಂಗ್ರಹಾಲಯಗಳು ಮತ್ತು ಸಾಹಸ ಚಟುವಟಿಕೆಗಳನ್ನು ನೀಡುವ ವಿಷಯಾಧಾರಿತ ಕ್ರಮಗಳು ಸೇರಿವೆ. ಹೊಸ ನೀತಿಯು ಕರಾವಳಿ ಮತ್ತು ವಿವಾಹ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಗೋವಾ ಮತ್ತು ರಾಜಸ್ಥಾನದಂತಹ ಸ್ಥಳಗಳೊಂದಿಗೆ ಸ್ಪರ್ಧಿಸಲು ಕರ್ನಾಟಕದ ಸಾಮಥ್ರ್ಯವನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತದೆ. ಕರ್ನಾಟಕದ ನಂದಿ ಬೆಟ್ಟಗಳು, ಗಿರಿಧಾಮಗಳು, ಕೋಟೆಗಳು ಮತ್ತು ಐತಿಹಾಸಿಕ ಸ್ಥಳಗಳು ಮದುವೆ ಪ್ರವಾಸೋದ್ಯಮಕ್ಕೆ ಸೂಕ್ತವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು. ಅಂತಾರಾಷ್ಟ್ರೀಯ ಮತ್ತು ದೇಶೀಯ ಪ್ರವಾಸಿಗರು ಸಾಮಾನ್ಯವಾಗಿ ರಾಜಸ್ಥಾನವನ್ನು ಮದುವೆಗಳಿಗೆ ಮತ್ತು ಗೋವಾವನ್ನು ಬೀಚ್ ಸಾಹಸಕ್ಕಾಗಿ ಪರಿಗಣಿಸುತ್ತಾರೆ, ಆದರೆ ನಾವು ಈ ಪ್ರದೇಶಗಳ ಪವಿತ್ರತೆ ಮತ್ತು ಸಾಮಥ್ರ್ಯವನ್ನು ಪರಿಗಣಿಸಿ ಯೋಜನೆಗಳನ್ನು ವಿನ್ಯಾಸಗೊಳಿಸುತ್ತಿದ್ದೇವೆ. ಹೋಮ್-ಸ್ಟೇ ಯೋಜನೆಯಿಂದ ಪಾಠಗಳನ್ನು ಕಲಿತಿದ್ದೇವೆ, ಅದನ್ನು ನಿಯಂತ್ರಿಸಲು ಸರ್ಕಾರ ಇನ್ನೂ ಕೆಲಸ ಮಾಡುತ್ತಿದೆ ಎಂದರು.










