ಬೆಂಗಳೂರು: ವೇಶ್ಯೆಯರ ಬಳಿಗೆ ತೆರಳುವ ಗಿರಾಕಿಗಳ ವಿರುದ್ಧ ದೂರು ದಾಖಲಿಸಲು ಕಾನೂನಿನಲ್ಲಿ ಯಾವುದೇ ರೀತಿಯ ಅವಕಾಶವಿಲ್ಲ ಎಂದು ನ್ಯಾಯಮೂರ್ತಿ ಕೆ.ಎನ್ ಪನೀಂದ್ರ ನೇತೃತ್ವದ ಏಕಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ.ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸ್ ಪಡೆ ಹೋಟೆಲ್ ವೊಂದರ ಮೇಲೆ ದಾಳಿ ನಡೆಸಿತ್ತು.ಇದೇ ವೇಳೆ ದಾಳಿಯಲ್ಲಿ ಸಿಕ್ಕವರ ಮೇಲೆ ಅನೈತಿಕ ವ್ಯವಹಾರ ನಿಷೇಧ ಕಾಯ್ದೆ-1956ರ ಸೆಕ್ಷನ್ 3, 4, 5, 6, 7 ಮತ್ತು ಐಪಿಸಿ ಸೆಕ್ಷನ್ 370 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಕೇಸ್ ವಿಚಾರಣೆ ನಡೆಸಿದ ಕೋರ್ಟ್, ಗಿರಾಕಿಗಳ ವಿರುದ್ಧ ಯಾವುದೇ ರೀತಿ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದೆ.ಪೊಲೀಸರು ದಾಖಲಿಸಿದ ದೂರು ರದ್ದುಪಡಿಸಿ ಆದೇಶ ಹೊರಡಿಸಿದೆ. ಅರ್ಜಿದಾರರು ವೇಶ್ಯಾವಾಟಿಕೆಯ ಗಿರಾಕಿಗಳ ವಿರುದ್ಧದ ಎಫ್ಐಆರ್ನಲ್ಲಿ ಯಾವ ಸೆಕ್ಷನ್ನ ಆರೋಪಗಳೂ ಇಲ್ಲ ಮತ್ತು ಗಿರಾಕಿಗಳಿಗೆ ಈ ಸೆಕ್ಷನ್ಗಳು ಅನ್ವಯಿಸುವುದಿಲ್ಲ ಎಂದು ಹೇಳಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಲು ಕೋರ್ಟ್ ಆದೇಶಿಸಿದೆ.










