ಹಾಸನ- ಸುರಿಯುತ್ತಿರುವ ಮಹಾಮಳೆ ಪರಿಣಾಮವಾಗಿ ಸಕಲೇಶಪುರ ತಾಲೂಕಿನಲ್ಲಿ ಹೊಸದಾಗಿ ನಿರ್ಮಿಸಿದ್ದ ಬಿಸಿಲೆ ಘಾಟ್ ರಸ್ತೆ ಅಪಾಯದ ಅಂಚು ತಲುಪಿದ್ದು, ಸಕಲೇಶಪುರ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗೆ ಸಂಪರ್ಕ ಕೊಂಡಿಯಾಗಿದ್ದ , ಬಿಸಿಲೆಘಾಟ್ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಕೆಲವೆಡೆ ಭೂಕಂಪವಾಗಿರುವ ಅನುಭವವಾಗಿದ್ದು, ಭೂಮಿ ಬಿರುಕು ಬಿಟ್ಟಿದ್ದು, ಹೆದರಿ ಹಿಜ್ಜನಹಳ್ಳಿ ಹಾಗೂ ಮಾಗೇರಿ ಗ್ರಾಮದ ಜನ ಊರು ಖಾಲಿ ಮಾಡಿದ್ದಾರೆ.










