ಚಿಕ್ಕಮಗಳೂರು- ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಸುರಿರುತ್ತಿರುವ ಭಾರೀ ಮಳೆಗೆ ತರೀಕೆರೆ ತಾಲೂಕಿನ ಕಲ್ಲತ್ತಿಗಿರಿ ಫಾಲ್ಸ್ ಮೈತುಂಬಿ ಹರಿಯುತ್ತಿದ್ದು, ಜಲಪಾತದಂತೆ ಅಪಾಯದ ಮಟ್ಟ ಮೀರಿದೆ. ಕೆಮ್ಮಣ್ಣುಗುಂಡಿ, ದತ್ತಪೀಠ, ಬಾಬಾಬುಡನ್ಗಿರಿ, ಭಾಗದಲ್ಲಿ ಸುರಿಯುತ್ತರೋ ಭಾರೀ ಮಳೆಗೆ ದಶಕಗಳ ಬಳಿಕ ಕಲ್ಲತ್ತಿಗಿರಿ ಫಾಲ್ಸ್ ನಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಪ್ರಸಿದ್ದ ವೀರಭದ್ರಸ್ವಾಮಿ ದೇವಾಲಯ ಮಟ್ಟದಲ್ಲಿ ಹರಿಯುತ್ತಿರುವ ನೀರು ಸ್ಥಳೀಯರಲ್ಲಿ ಆತಂಕವನ್ನು ಸೃಷ್ಟಿಸಿದೆ. ದೇವಾಲಯದ ಬಳಿ ಹೋಗಲು ಭಕ್ತರು ಹಾಗೂ ಪ್ರವಾಸಿಗರು ಹಿಂದೇಟು ಹಾಕಿದ್ದಾರೆ. ನೀರಿನ ಬೋರ್ಗೊರೆತ ಹಾಗೂ ಹೆಚ್ಚುತ್ತಿರೋ ನೀರಿನ ಪ್ರಮಾಣ ಕಂಡ ಕಲ್ಲತ್ತಿಪುರ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ಆದರೆ ದಶಕಗಳ ಬಳಿಕ ಧುಮುಕಿ ಹರಿಯುತ್ತಿರೊ ಜಲಪಾತವನ್ನು ನೋಡಲು ಸುತ್ತಮುತ್ತಲಿನ ನೂರಾರು ಜನ ಕಲ್ಲತ್ತಿಗಿರಿ ಫಾಲ್ಸ್ ಬಳಿ ಜಮಾಯಿಸುತ್ತಿದ್ದಾರೆ. ಎಂತಹ ಬರಗಾಲದಲ್ಲೂ ಈ ದೇವಾಲಯದ ಬಳಿ ನೀರು ನಿಂತಿರೋ ಉದಾಹರಣೆಯೆ ಇಲ್ಲ. ಎರಡು ಮೂರು ವರ್ಷಗಳ ಬರಗಾಲದಲ್ಲೂ ಇಲ್ಲಿ ನೀರು ಸದಾ ಹರಿಯುತ್ತಿರುತ್ತದೆ. ಆದರೆ ಎರಡು ಮೂರು ವರ್ಷದಿಂದ ತೀರ ಸಣ್ಣ ಪ್ರಮಾಣದಲ್ಲಿ ಹರಿಯುತ್ತಿದ್ದ ನೀರು ಈ ವರ್ಷದ ಮುಂಗಾರು ಮಳೆಗೆ ಮೂರೇ ದಿನಕ್ಕೆ ಜಲಪಾತದಂತೆ ಹರಿಯುತ್ತಿರುವುದನ್ನು ಕಂಡು ಸ್ಥಳೀಯರು ಸೇರಿದಂತೆ, ಪ್ರವಾಸಿಗರು ಪೋಟೊ,ಸಲ್ಫಿ ತೆಗೆಯುತ್ತ ಸಂತೋಷ ಪಡುತ್ತಿದ್ದಾರೆ.