ಮಾತೃಭಾಷೆ ಕಣ್ಣಿದ್ದಂತೆ ಇತರ ಭಾಷೆ ಕನ್ನಡಕವಿದ್ದಂತೆ.-ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು …

409
firstsuddi

ಮೈಸೂರು: ಸುತ್ತೂರು ಮಠದ ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಜಯಂತಿ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿ, ಮಾತೃಭಾಷೆ ಕಣ್ಣಿದ್ದಂತೆ. ಇತರ ಭಾಷೆ ಕನ್ನಡಕವಿದ್ದಂತೆ. ಕನ್ನಡಕಕ್ಕಿಂತಲೂ ಕಣ್ಣು ಮುಖ್ಯ. ಹಾಗಾಗಿಯೇ ಮಾತೃಭಾಷೆಯನ್ನು ಬಳಸಬೇಕು,ಕನ್ನಡ ಸುಂದರ ಭಾಷೆ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮನೆಯಲ್ಲಿ ಮಾತೃಭಾಷೆ ಬಳಸಿ, ಹೊರಗೆ ಅನ್ಯಭಾಷೆ ಬಳಸಿದರೆ ಅಡ್ಡಿ ಇಲ್ಲ ಎಂದಿದ್ದಾರೆ.