ಬೆಂಗಳೂರು- ನೂತನ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಪ್ರಿಯಾಂಕ್ ಖರ್ಗೆ ಅವರಿಗೆ ಕೆ.ಪಿ.ಸಿ.ಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್ ಹಾಗೂ ಮೂಡುಬಿದಿರೆ ಕಾಂಗ್ರೇಸ್ ಮುಖಂಡರಾದ ಆಲ್ವಿನ್ ಡಿಸೋಜಾರವರು ಸಚಿವರ ಸದಾಶಿವನಗರದ ಮನೆಗೆ ತೆರಳಿ ಸನ್ಮಾನಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಕರಾವಳಿಯಲ್ಲಿ ಕಾಂಗ್ರೇಸ್ ಪಕ್ಷದ ಸಂಘಟನೆಯ ಬಗ್ಗೆ ಚರ್ಚಿಸಿದ್ದು, ಹಾಗೂ ಪಕ್ಷದ ಬಲವರ್ಧನೆಗೆ ಪ್ರಿಯಾಂಕ್ ಖರ್ಗೆಯವರು ಸಲಹೆಯನ್ನು ನೀಡಿದ್ದಾರೆ.