ತುಮಕೂರು: ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದೆ ಎಂದು ಡಾ. ಪರಮೇಶ್ ಅವರು ಹೇಳಿದ್ದಾರೆ. ಶ್ರೀಗಳ ಬಿಪಿ ಉಸಿರಾಟದಲ್ಲಿ ಯಾವುದೇ ತೊಂದರೆ ಇಲ್ಲ.ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಶ್ರೀಗಳಿಗೆ ಇಂದು ಬೆಳಗ್ಗೆ 5 ಗಂಟೆಗೆ ರಕ್ತ ಪರೀಕ್ಷೆ ಮಾಡಲಾಗಿದೆ. ಶ್ರೀಗಳಿಗೆ ಗಟ್ಟಿ ಆಹಾರ ಸೇವನೆ ಮಾಡಲಾಗುತ್ತಿಲ್ಲ. ದ್ರವ ರೂಪದ ಆಹಾರ ಸೇವನೆ ಮಾಡುತ್ತಿದ್ದಾರೆ ಎಂದು ಡಾ ಪರಮೇಶ್ ಅವರು ತಿಳಿಸಿದ್ದಾರೆ.










