ಜಿಲ್ಲಾಡಳಿತದಿಂದ ಪರಿಹಾರವನ್ನು ದೊರಕಿಸಿ ಕೊಡುವಂತೆ ಎಸ್.ಎಲ್.ಭೋಜೇಗೌಡ ಅವರನ್ನು ಒತ್ತಾಯಿಸಿದ್ದಾರೆ…

326
firstsuddi

ಚಿಕ್ಕಮಗಳೂರು -ರಸ್ತೆ ಅಗಲೀಕರಣದ ವೇಳೆ ಒಡೆದಿರುವ ತಮ್ಮ ಕಟ್ಟಡಗಳಿಗೆ ಹೈಕೋರ್ಟ್‍ನ ಆದೇಶದ ಪ್ರಕಾರ ಜಿಲ್ಲಾಡಳಿತದಿಂದ ಪರಿಹಾರವನ್ನು ದೊರಕಿಸಿ ಕೊಡುವಂತೆ ನಗರದ ಐ.ಜಿ ಮತ್ತು ಕೆ.ಎಂ. ರಸ್ತೆಯ ಕಟ್ಟಡಗಳ ಮಾಲೀಕರು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರನ್ನು ಒತ್ತಾಯಿಸಿದ್ದಾರೆ.ಐ.ಜಿ ಮತ್ತು ಕೆ.ಎಂ. ರಸ್ತೆ ಕಟ್ಟಡ ಮಾಲೀಕರ ಸಂಘದ ನೇತೃತ್ವದಲ್ಲಿ ಸೋಮವಾರ ಭೋಜೇಗೌಡ ಅವರನ್ನು ಭೇಟಿ ಮಾಡಿ ಈ ಸಂಬಂಧ ಮನವಿ ಸಲ್ಲಿಸಿದರು.
2010-11 ರಲ್ಲಿ ರಸ್ತೆ ಅಗಲೀಕರಣದ ವೇಳೆ ನಮ್ಮ ಕಟ್ಟಡಗಳಿಗೆ ಸೂಕ್ತ ಪರಿಹಾರ ನೀಡಿ ಒಡೆಯಲು ನಿರ್ದೇಶನ ನೀಡುವಂತೆ ನಾವುಗಳು ರಾಜ್ಯ ಉಚ್ಚನ್ಯಾಯಾಲಯದ ಮೊರೆ ಹೋಗಿದ್ದೆವು, ಆ ಸಂದರ್ಭದಲ್ಲಿ ನಮ್ಮೊಂದಿಗೆ ಮಾತುಕತೆ ನಡೆಸಿದ ಅಂದಿನ ಜಿಲ್ಲಾಧಿಕಾರಿ ಚನ್ನಪ್ಪಗೌಡ ಅವರು ಪರಿಹಾರ ನೀಡುವ ಭರವಸೆ ಕೊಟ್ಟಿದ್ದರು ಎಂದು ತಿಳಿಸಿದರು.ಪರಿಹಾರದ ಭರವಸೆ ದೊರೆತ ಹಿನ್ನೆಲೆಯಲ್ಲಿ ನಮ್ಮ ಕಟ್ಟಡಗಳನ್ನು ಒಡೆಯಲು ಅನುವು ಮಾಡಿಕೊಟ್ಟಿದ್ದೆವು ಆದರೆ ಒಡೆದ ನಂತರ ಯಾವುದೇ ಪರಿಹಾರ ಬಾರದ ಹಿನ್ನೆಲೆಯಲ್ಲಿ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದ್ದೆವು ಎಂದು ಹೇಳಿದರು.ಇದೀಗ ಕಟ್ಟಡ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ಉಚ್ಚನ್ಯಾಯಾಲಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತಮಗೆ ಜಿಲ್ಲಾಡಳಿತದಿಂದ ಪರಿಹಾರವನ್ನು ದೊರಕಿಸಿ ಕೊಡಬೇಕು ಎಂದು ಆಗ್ರಹಿಸಿದರು.
ಐ.ಜಿ ಮತ್ತು ಕೆ.ಎಂ. ರಸ್ತೆ ಕಟ್ಟಡಗಳ ಮಾಲೀಕರ ಸಂಘದ ಉಪಾಧ್ಯಕ್ಷ ಸಿ.ಎಸ್.ದಯಾನಂದ ನಾಯ್ಡು, ಪ್ರಧಾನ ಕಾರ್ಯದರ್ಶಿ ಎನ್.ಎಸ್.ಜಗದೀಶಾಚಾರ್, ಕಾರ್ಯದರ್ಶಿ ಎಂ.ಎಸ್.ಸುಧೀರ್, ಕಟ್ಟಡ ಮಾಲೀಕರಾದ ಪ್ರಸನ್ನಕುಮಾರ್ ಶೆಟ್ಟಿ, ಅರವಿಂದ್, ಗೋಪಾಲಕೃಷ್ಣಶೆಟ್ಟಿ, ಜೆ.ಎಲ್.ಡಿಸೋಜ, ವಿದ್ಯಾಶಂಕರ್ ಹಾಜರಿದ್ದರು.