ತುಮಕೂರು– ಕೊರಟಗೆರೆಯ ಕ್ಯಾಮೇನಹಳ್ಳಿಯಲ್ಲಿ ಮಾತನಾಡಿದ ಡಿಸಿಎಂ ಡಾ.ಜಿ ಪರಮೇಶ್ವರ್ ನಮ್ಮ ಸರ್ಕಾರ ರೈತರ 49 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ. ರೈತರಿಗಾಗಿ ನಮ್ಮ ಅನಗತ್ಯ ಖರ್ಚುಗಳನ್ನು ನಿಲ್ಲಿಸಿದ್ದೇವೆ. ಬ್ಯಾಂಕ್ ಸಾಲ ಹಾಗೂ ಕೈಸಾಲ ಮನ್ನಾಗೂ ಕಾಯ್ದೆ ರೂಪಿಸಿದ್ದೇವೆ. ಕ್ಯಾಬಿನೆಟ್ನಲ್ಲಿಯೂ ಋಣಮುಕ್ತ ಕಾಯ್ದೆಯನ್ನು ಮಂಜೂರು ಮಾಡಲಾಗಿದೆ. ಕೈಸಾಲ ಪಡೆದ ರೈತರು ಸಾಲ ಕೊಟ್ಟಿರುವವರಿಗೆ ಕೈ ಮುಗಿದು ಬಿಡಿ ಎಂದು ರೈತರ ಪರವಾಗಿ ಮಾತನಾಡಿದ್ದಾರೆ.










