ಚಿಕ್ಕಮಗಳೂರು : ಮಹಿಳಾ ತರಬೇತಿ ಪೊಲೀಸ್ ಪೇದೆ ಹುಟ್ಟುಹಬ್ಬದ ದಿನವೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ರಾಮೇನಹಳ್ಳಿ ತರಬೇತಿ ಕೇಂದ್ರದಲ್ಲಿ ನಡೆದಿದ್ದು, ಕವಿತಾ(26) ಆತ್ಮಹತ್ಯೆಗೆ ಶರಣಾದ ತರಬೇತಿ ಪೊಲೀಸ್ ಪೇದೆ ಎನ್ನಲಾಗಿದ್ದು, ಬೆಂಗಳೂರಿನಲ್ಲಿ ನೇಮಕಾತಿಯಾಗಿದ್ದ ಕವಿತಾ ಅವರು ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದು, ಹಲವು ತಿಂಗಳಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಇವರು ಬಳ್ಳಾರಿ ಜಿಲ್ಲೆಯ ಹೂನಿನ ಹಡಗಲಿ ಮೂಲದವರು ಎನ್ನಲಾಗಿದ್ದು, ಬಸವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.










