ಚಿಕ್ಕಮಗಳೂರು : ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗ್ಡೆ ಅವರ ನಿಧನ ಹಿನ್ನೆಲೆ, ಎಂದಿನಂತೆ ಎಬಿಸಿ ಕಂಪನಿ ನೌಕರರಿಗೆ ತಿಂಗಳ ಮೊದಲ ವಾರದಲ್ಲೇ ಸಂಬಳ ನೀಡಲು ಕಂಪನಿ ನಿರ್ಧರಿಸಿದ್ದು, ಮುಂದೆಯೂ ನೌಕರರಿಗೆ ಸಂಬಳ ನಿಧಾನವಾಗದಂತೆ ನೋಡಿಕೊಳ್ಳಿ ಎಂದು ಸಿದ್ದಾರ್ಥ್ ಅವರ ಪತ್ನಿ ಮಾಳವಿಕ ಅವರು ಸಿದ್ದಾರ್ಥ್ ಯಾವತ್ತೂ ನೌಕರರಿಗೆ ಸಮಸ್ಯೆ ಆಗದಂತೆ ಎಲ್ಲವನ್ನೂ ನಡೆಸಿಕೊಂಡು ಬಂದಿದ್ದು, ಅದರಂತೆ ನೌಕರರಿಗೆ ಸಮಸ್ಯೆಯಾಗದಂತೆ ನಿಗಾವಹಿಸಿ ಎಂದು ಕಂಪನಿ ವ್ಯವಸ್ಥಾಪಕರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.










