ನೂರಾರು ಮೋದಿ ಬಂದರು ನನ್ನ ಸೋಲಿಸೋಕಾಗಲ್ಲ ಅಂದ್ರು ಉತ್ತರ ಕರ್ನಾಟಕದ ಶಾಸಕ

777

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಿದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಇಳಕಲ್ ಪಟ್ಟಣದಲ್ಲಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ಮೋದಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳಿಗೆ ಯಡಿಯೂರಪ್ಪ ಬರುತ್ತಾರೆ ಎಂದು ಪ್ರತಿಕ್ರಿಯಿಸಿದ ಅವರು, ಹುನಗುಂದಕ್ಕೆ ಯಡಿಯೂರಪ್ಪ ಅಲ್ಲ, ಮೋದಿನೇ ಬಂದು, ತಾಕತ್ತಿದ್ರೆ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ.
ನಾನು ಯಾರಿಗೂ ಅಂಜೋನಲ್ಲ. ಯಾರೇ ಬಂದ್ರು ನಾನು ಹೀಗೆ ಇರ್ತೇನೆ. ಮೋದಿಯಂತಹ ನೂರು ಜನ ಬಂದ್ರು ನಾನು ಬಗ್ಗಲ್ಲ ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲೂ ಗೆಲುವು ನನ್ನದೆ, ನಾನೇ ಎಂಎಲ್ಎ ಎಂದು ಸ್ವಯಂ ಘೋಷಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here