ಮೂಡಿಗೆರೆ- ಕಳಸ ಸಮೀಪದ ಮಾರಕೋಡು ಗ್ರಾಮದ ಅರುಣ್ ಎಂಬುವರ ಕಾಫಿತೋಟದಲ್ಲಿ ಮೂರು ದಿನದಿಂದ ಕಣ್ಣಿಗೆ ಪೆಟ್ಟು ಬಿದ್ದ ಪರಿಣಾಮ ಒಂದೇ ಜಾಗದಲ್ಲಿ ಬಿದ್ದಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರುಗ ತಜ್ಞಾ ಅರ್ಜುನ್ ಸೆರೆ ಹಿಡಿದು ಕೆರೆಕಟ್ಟೆ ಅರಣ್ಯಕ್ಕೆ ಬಿಟ್ಟಿದ್ದು, ಬೃಹತ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದ ಮೇಲೆ ತೋಟದ ಮಾಲೀಕ ಹಾಗೂ ತೋಟದ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.