ಕೊಪ್ಪಳ- ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ನನಗೀಗ ಚುನಾವಣೆಯಲ್ಲಿ ಸ್ಪರ್ಧಿಸುವ ಆಸಕ್ತಿ ಇಲ್ಲ, ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದರೂ ಜನ ಮನ್ನಣೆ ನೀಡಲಿಲ್ಲ, ಕೆಲಸವೊಂದೇ ಮಾನದಂಡ ಅಲ್ಲ, ವಿಧಾನ ಸಭಾ ಚುನಾವಣೆ ಸೋಲಿನಿಂದ ನನಗೆ ತುಂಬ ಬೇಸರವಾಗಿದೆ,ಯಾವ ಚುನಾವಣೆ ಮೇಲೂ ಆಸಕ್ತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.










