ಬೆಂಗಳೂರು: ಆಪರೇಷನ್ ಕಮಲದ ಮೂಲಕ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಬಿಳಿಸಲು ಯತ್ನಿಸುತ್ತಿದೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಗೋವಿಂದ್ ಕಾರಜೋಳ ಅವರು ಸಮ್ಮಿಶ್ರ ಸರ್ಕಾರದಲ್ಲಿ ಬೆಳಗಾವಿ,ದಾವಣಗೆರೆ ಮತ್ತು ಬೆಂಗಳೂರು ಎಂದು ಮೂರು ಬಣಗಳಿವೆ ಅವರವರೇ ಕಿತ್ತಾಡಿಕೊಂಡು ಬಿಜೆಪಿಯತ್ತ ಬೊಟ್ಟು ಮಾಡುತ್ತಿದ್ದಾರೆ. ಬೇರೆ ಶಾಸಕರನ್ನು ಸೆಳೆಯುವ ಪ್ರಯತ್ನ ನಾವು ಮಾಡಿಲ್ಲ.ಸಮ್ಮಿಶ್ರ ಸರ್ಕಾರ ಸಾಯಲು ವಿಷ ಹಾಕಬೇಕಾಗಿಲ್ಲ ಹಾಲು ಕುಡಿದೇ ಸಾಯುತ್ತದೆ ಎಂದಿದ್ದಾರೆ.










